PRE RELEASE OFFER | ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ | ಶ್ರೀಪಡ್ರೆ |

160.00

 

 

ಈ ಪುಸ್ತಕ ಈ ಶನಿವಾರದಿಂದ ಓದುಗರಿಗೆ ಲಭ್ಯ.

ಶ್ರೀಪಡ್ರೆ ಅವರು ಬರೆದಿರುವ ಈ ಪುಸ್ತಕ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

ಈ ಕೃತಿಯು ವಿವಿಧ ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಯ ಅಗತ್ಯವನ್ನು ಮನಗಾಣಿಸಿಕೊಡುತ್ತದೆ. ದೇಶವಿದೇಶಗಳಲ್ಲಿ ನಡೆಯುತ್ತಿರುವ ನಾನಾ ಮೌಲ್ಯವರ್ಧನೆ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲುತ್ತ ಅನೇಕ ಉತ್ಸಾಹಿ ಉದ್ಯಮಶೀಲರಿಗೆ ಈ ನಿಟ್ಟಿನಲ್ಲಿ ಮುಂದಡಿ ಇಡಲು ಪ್ರೇರೇಪಿಸುತ್ತದೆ ಕೂಡ.

ಈ ಕೃತಿಯನ್ನು ಕುರಿತು ಪ್ರಮುಖ ಅಭಿವೃದ್ಧಿ ಬರಹಗಾರ ಜಿ. ಕೃಷ್ಣ‌ಪ್ರಸಾದ್ ಅವರ ಅಭಿಪ್ರಾಯ ಹೀಗಿದೆ-

ಕಂಗೆಟ್ಟಿರುವ ಕೃಷಿ ಕ್ಷೇತ್ರಕ್ಕೆ ಚೈತನ್ಯದಾಯಿ ಟಾನಿಕ್

ಬೆಲೆ ಸಿಗದೆ ನೆಲ ಕಚ್ಚುವ ಹಣ್ಣು-ತರಕಾರಿಗಳಿಗೆ ಮಾನ ತಂದುಕೊಡುವ ಮೌಲ್ಯವರ್ಧನೆಯ ಯಶೋಗಾಥೆಗಳು ಕೇವಲ ಬರಹಗಳಷ್ಟೇ ಅಲ್ಲ, ಓದುಗರನ್ನು ಈ ನಿಟ್ಟಿನಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳಲು ಪ್ರೇರೇಪಿಸುವ ಟಾನಿಕ್‌ ಕೂಡ.

ಕೃಷಿ ಕ್ಷೇತ್ರ ಖಾಸಗಿ ಕಂಪನಿಗಳ ಪಾಲಾಗುತ್ತಿರುವ ಇಂದಿನ ಸಂಕಷ್ಟದ ಕಾಲದಲ್ಲಿ ಈ ಪುಸ್ತಕ ಪ್ರಯೋಗಶೀಲ ಕೃಷಿಕರಿಗೆ ಹೊಸದಿಕ್ಕು ತೋರಬಲ್ಲದು.

ಮಾರುಕಟ್ಟೆಯನ್ನು ಹುಡುಕುವುದಲ್ಲ, ಹುಟ್ಟು ಹಾಕುವುದು ಎಂಬ ಸತ್ಯ ಕೃಷಿಕರಿಗೆ ಅರ್ಥವಾಗಬೇಕಿದೆ. ಅಂಥ ಬದಲಾವಣೆಗೆ ಈ ಪುಸ್ತಕ ದಾರಿದೀಪವಾಗುವುದೆಂಬ ಆಶಯ.

Description

Value addition of Horticulture Produce

 

Reviews

There are no reviews yet.

Be the first to review “PRE RELEASE OFFER | ರೈತರ ಆದಾಯವರ್ಧನೆಗೆ ಮೌಲ್ಯವರ್ಧನೆ | ಶ್ರೀಪಡ್ರೆ |”

Your email address will not be published. Required fields are marked *